Pages

Ads 468x60px

Saturday 21 August 2021

ಓಣಂ ಪಾಯಸ

 



ಶ್ರಾವಣದ ಮೊದಲ ಹಬ್ಬ ನಾಗಪಂಚಮಿ ಹಬ್ಬದ ದಿನದಂದು ಪಾಯಸ ಇರಲೇಬೇಕು ಮಗನೂ ಮನೆಯಲ್ಲಿರುವಾಗ ಓಣಂಹಬ್ಬಕ್ಕಾಗಿ ರೇಷನ್ ಕಿಟ್ ಕೂಡಾ ತಂದು ಕೊಟ್ಟಿದ್ದಾನೆಹಬ್ಬದ ಸಲುವಾಗಿ ರೇಷನ್ ಸಾಮಗ್ರಿಗಳು ಏನೇನಿವೆ?

ಸಕ್ಕರೆ ಒಂದು ಕಿಲೊ ಬಂದಿದೆ ನಾವು ಪಾಯಸಕ್ಕೆ ಬೆಲ್ಲ ಬಳಸುವವರು.

ಒಂದು ಕಿಲೋ ಪಾಯಸಕ್ಕೆಂದೇ ಕೆಂಪು ಸಣ್ಣಕ್ಕಿ ಬಂದಿದೆ ಇದನ್ನೇ ಪಾಯಸ ಮಾಡಿ ನೋಡಿದ್ರಾದೀತು.

ಗೇರುಬೀಜ ಒಂದು ಪ್ಯಾಕೆಟ್ಟು,

ಏಲಕ್ಕಿ ಒಂದು ಪ್ಯಾಕ್  ಏಲಕ್ಕಿಯನ್ನು ಮುಗಿಸಲಿಕ್ಕೆ ದಿನಾ ಬಿಸಿನೀರನ್ನೇ ಕುಡಿಯುವವರಿದ್ದರೆ ಜಜ್ಜಿ ಹಾಕಬಹುದಿತ್ತು ನಾವು ಸುರಂಗದ ನೀರನ್ನು ಹಾಗೇನೇ ಕುಡಿಯುವವರಾಗಿದ್ದೇವೆ.

ಮತ್ತೇನಪಾ ಅಂದರೆ ಶರ್ಕರವರಟಿ ಇದ್ದಿತು ಅದೂ ಒಂದು ಪ್ಯಾಕ್ ನಂಗೆ ತುಂಬ ಇಷ್ಟ.. " ಮಧು ಅತ್ತ ಇತ್ತ ಹೋಗುತ್ತ ಬರುತ್ತ ತಿಂದು ಮುಗಿಸಿದ ಶರ್ಕರವರಟಿ ಅಂದರೆ ನೇಂದ್ರ ಬಾಳೆಕಾಯಿಯ ಸಿಹಿ ಚಿಪ್ಸ್ ಎಂದು ತಿಳಿಯಿರಿ.

ಒಂದು ಪುಟ್ಟ ಜಾಡಿ ತುಪ್ಪವೂ ಬಂದಿದೆ ನಾಲ್ಕು ದಿನಕ್ಕೊಂದಾವರ್ತಿ ಬೆಣ್ಣೆ ಕಾಯಿಸಿ ತುಪ್ಪ ಮಾಡಿಕೊಳ್ಳುವವರು ನಾವಾದರೂಪಾಯಸದ ಗೋಡಂಬಿ ದ್ರಾಕ್ಷಿಗಳನ್ನು ಇದೇ ತುಪ್ಪದಲ್ಲಿ ಹುರಿಯೋಣ.


ಈಗ ಪಾಯಸದ ಸಂಗತಿ ಹೇಗೆಂದು ತಿಳಿಯೋಣ.

ರೇಷನ್ ಏಲಕ್ಕಿ ಪ್ಯಾಕ್ ಬಿಡಿಸಬೇಕೆಂದಿಲ್ಲ ಅಡುಗೆಮನೆಯ ಡಬ್ಬದಲ್ಲಿ ಏಲಕ್ಕಿ ಇರುವಾಗ ನಾವು ಅಡಿಕೆ ಬೆಳೆಗಾರರೂ ಆಗಿರುವಾಗ ತೋಟದ ಮಿಶ್ರಬೆಳೆಯಾಗಿ ಸಾಕಷ್ಟು ಏಲಕ್ಕಿಯೂ ಸಿಗುತ್ತದೆ.   ಈಗ ಕೊರೋನಾ ಕಾರಣದಿಂದ ತೋಟದಲ್ಲಿ ಕಾರ್ಮಿಕರಿಲ್ಲ.   ಏಲಕ್ಕಿ ತೋಟದಲ್ಲಿ ಇದ್ದರೂ ತರಲು ಜನವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಹಸಿ ತೆಂಗಿನಕಾಯಿ ತುರಿದುಅರೆದು ಅರೆಯುವಾಗಲೇ ಸುವಾಸನೆ ಬರುವಷ್ಟು ಏಲಕ್ಕಿ ಹಾಕಿದರೆ ಉತ್ತಮ.   ದಪ್ಪ ಕಾಯಿಹಾಲನ್ನು ತೆಗೆದು ಇರಿಸುವುದು.   ಇದನ್ನು ಕೊನೆಯ ಹಂತದಲ್ಲಿ ಪಾಯಸಕ್ಕೆ ಎರೆಯುವುದಾಗಿದೆ.

ಕಾಯಿ ಚರಟಕ್ಕೆ ಪುನಃ ನೀರೆರೆದು ಹಾಲು ತೆಗೆಯಿರಿ ಇದು ತೆಳ್ಳಗಿನ ಕಾಯಿಹಾಲು.


ಪಾಯಸದ ಕೆಂಪಕ್ಕಿ ತೊಳೆಯಿರಿ ಒಂದು ಲೋಟ ಅಕ್ಕಿಗೆ ಅಂದಾಜು ನಾಲ್ಕು ಲೋಟ ನೀರೆರೆದು ಕುಕ್ಕರಿನಲ್ಲಿ ಬೇಯಿಸಿ ಮೂರುಸೀಟಿ ಹಾಕಲಿ.   ಅಕ್ಕಿ ಮೃದುವಾಗಿ ಬೆಂದರಾಯಿತು.

ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಒಂದು ಅಚ್ಚು ಬೆಲ್ಲ ಹಾಕಿರಿ ಪುಡಿ ಮಾಡಿ ಹಾಕಿದ್ರೆ ಉತ್ತಮ ಎರಡು ಉಪ್ಪಿನ ಕಲ್ಲೂಬೀಳಲಿ ಬೆಲ್ಲ ನಿಧಾನ ಗತಿಯಲ್ಲಿ ಕರಗುತ್ತಿರಲಿ ತೆಳ್ಳಗಿನ ಕಾಯಿಹಾಲು ಈಗ ಎರೆಯಿರಿ.

ತುಪ್ಪದಲ್ಲಿ ಗೇರುಬೀಜ ಹೊಂಬಣ್ಣ ಬರುವ ತನಕ ಹುರಿಯಿರಿ ಮೇಲಿನಿಂದ ಒಣದ್ರಾಕ್ಷಿ ಉದುರಿಸಿ.

ಏಲಕ್ಕಿ ದ್ರಾಕ್ಷಿ ಗೇರುಬೀಜಗಳನ್ನು ಇಷ್ಟೇ ಹಾಕಬೇಕು ಎಂಬ ಲೆಕ್ಕಾಚಾರ ನಡೆಯದು.   ಇದ್ದಂತೆ ಬಳಸಿದರಾಯಿತು.

  ಹಿತ್ತಲಲ್ಲಿ ಅರಸಿನದ ಗಿಡ ಇದೆಯಾದರೆ ಒಂದು ಎಲೆ ಚಿವುಟಿ ತನ್ನಿ ಕುದಿಯುವ ಪಾಯಸಕ್ಕೆ ಹಾಕಿದರೆ ಅದೂ ಒಂದು ಸೊಗಸಾದ ಸುವಾಸನೆಯನ್ನು ಪಾಯಸಕ್ಕೆ ಕೊಡಬಲ್ಲುದು.   ಅಕ್ಕಿ ಪಾಯಸಕ್ಕೆ ಮಾತ್ರ ಅರಸಿನ ಎಲೆ ಹಾಕುವ ವಾಡಿಕೆ.


ಬೆಲ್ಲ ಕರಗಿ ಪಾಯಸದೊಂದಿಗೆ ಬೆರೆತಾಗ ಬೆಲ್ಲವೂ ಪರಿಮಳ ಬೀರಿತೇ ದಪ್ಪ ಕಾಯಿ ಹಾಲು ಎರೆಯುವ ಸಮಯ ಎರೆಯಿರಿ.  

ಅರೆಯುವಾಗ ಏಲಕ್ಕಿ ಹಾಕಲಿಲ್ಲವೇ ಈಗ ಹುಡಿ ಮಾಡಿ ಉದುರಿಸಿ.

ದ್ರಾಕ್ಷಿ ಗೋಡಂಬಿಗಳು ತುಪ್ಪ ಸಹಿತವಾಗಿ ಬೀಳಲಿ.

ಸಣ್ಣ ಕುದಿ ಬಂದಾಗ ಇಳಿಸಿ ಪಾಯಸಕ್ಕೆ ಬೆಲ್ಲದ ಸಿಹಿ ಸಾಕಾಗಲಿಲ್ಲವೇ ಸಕ್ಕರೆ ಹಾಕುವುದು.

ನಮ್ಮ ಓಣಂ ಪಾಯಸ ಆಯ್ತು.

ನಾಗಪಂಚಮಿ ಹಾಗೂ ಸಂಕ್ರಾಂತಿಯ ಲೆಕ್ಕಾಚಾರದಲ್ಲಿ ನಾನಂತೂ ಎರಡು ಬಾರಿ ಪಾಯಸ ಸವಿದಾಯ್ತು

ಇನ್ನೊಮ್ಮೆ ಪಾಯಸ ಮಾಡಬಹುದಾದಷ್ಟು ಕೆಂಪು ಸಣ್ಣಕ್ಕಿ ಉಳಿದಿದೆ.




0 comments:

Post a Comment