Pages

Ads 468x60px

Wednesday 26 October 2022

ಗ್ರಹಣ

 


"ಇವತ್ತು ಗ್ರಹಣ ಗೊತ್ತುಂಟೊ? "

"ಹ್ಞಾ ಈಗ ತಾನೇ ಒಂದು ಬ್ಲಾಗ್ ಲೇಖನ ಫೇಸ್ ಬುಕ್ಕಲ್ಲಿ ಬಂದಿದೆ...”

ಅದೆಲ್ಲ ನಂಗೆ ಬೇಡ ನಾನು ಕಳಿಸಿದ ಟೆಲಿಗ್ರಾಂ  ಫೋಟೋಸ್ ನೋಡು.."


"ನೋಡಿ ಆಯ್ತು..  ಹಳೇ ಕಾಗದ ಪತ್ರದಲ್ಲಿ ಏನುಂಟು ಅಂತ ಒಮ್ಮೆ ಹೇಳಿ..."

"ಅದೇ ಗ್ರಹಣದ ವಿಷಯಅಂದಾಜು 200 ವರ್ಷ ಹಳೆಯದು ತಿಳೀತಾ.."

... ಹಾಗೆ ವಿಷಯ ಅನ್ನಿ ಅತಿ ಪುರಾತನ ಸಂಗ್ರಹ ಬರಹಗಳು ನಮ್ಮ ಬಳಿ ಇದೇ... "





“ ಇವು ಯಾವುದಾದರೂ ಪಂಚಾಂಗದ ಪುಟಗಳೇ? "  ಫೇಸ್ ಬುಕ್ ಮಿತ್ರರಾದ ಶ್ರೀಯುತ ಚಿದಂಬರ ಕಾಕತ್ಕರ್ ಪ್ರಶ್ನೆಯೊಂದನ್ನು ಎಸೆದರು.


 ಪಂಚಾಂಗ ಅಂತ ಹೇಳಲಿಕ್ಕೆ ಬರುವುದಿಲ್ಲ ಮಂಗಳೂರಿನ ಬಾಸೆಲ್ ಮಿಶನ್ ಪ್ರಕಟಿತ ಪುಸ್ತಕ ಕತೆಗಳೂ ಇದೆ ಕೆಲವೇ ಪುಟಗಳು ಲಭ್ಯವಾಗಿದ್ದು ನಮ್ಮ ಹಿರಿಯರು ಲೆಕ್ಕಪತ್ರ ಪುಸ್ತಕದ ಬೈಂಡ್ ಪೇಪರ್ ಆಗಿ ಬಳಸಿದ  ಕಾಗದದ ತುಣುಕುಗಳನ್ನು ಗಮನಿಸಿ ನನ್ನ ಪತಿ ಜೋಪಾನವಾಗಿ ಇರಿಸಿಕೊಂಡಿದ್ದಾರೆ...


 ತೆರನಾದ ಉತ್ತರ ನನ್ನಿಂದ ಹೋಯಿತು.


ಹಿರಣ್ಯದ ನೆಲದಲ್ಲಿರುವ ನಾಗಬನದ ಜೀರ್ಣೋದ್ಧಾರ ಕ್ರಿಯೆ ಆರಂಭವಾಗ ಬೇಕಾದರೆ ಒಂದು ಬಂಟ ಸಮುದಾಯ ನಮ್ಮೊಂದಿಗೆ ಸೇರಿಕೊಂಡಿದ್ದೇ ಕಾರಣವಾಯಿತು.   ಹಲವು ಅಷ್ಟಮಂಗಲ ಪ್ರಶ್ನೆಗಳೂ ನಡೆದು ದೈವ ಸಾನಿಧ್ಯವೂ ಇಲ್ಲಿದೆಯೆಂದು ತಿಳಿದು ಬಂದಿತು ಇದು ಎಲ್ಲರ ಉತ್ಸಾಹಕ್ಕೆ ಕಾರಣವೂ ಆಯಿತು.


ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ  ಮಣ್ಣಿನವರು ಎಂದೂ ದೃಢ ಪಟ್ಟಿತು ತದ ನಂತರ ಅಟ್ಟದಲ್ಲಿದ್ದ ಹಳೆಯ ಕಾಗದಪತ್ರಗಳು ಒಂದೊಂದಾಗಿ ಹೊರಬಂದವು.


ಬಂಟ ಸಮುದಾಯ ಇಲ್ಲಿ 200 ವರ್ಷಗಳ ಹಿಂದೆ ಇದ್ದವರೆಂದು ತೀರ್ಮಾನಕ್ಕೆ ಬರಲಾಯಿತು ಕುಡಿತ ಜುಗಾರಿ ಇತ್ಯಾದಿ ದುರ್ವ್ಯಸನಗಳಿಂದ ಆಸ್ತಿಪಾಸ್ತಿಗಳನ್ನೆಲ್ಲ ಕಳೆದು ಭಿಕಾರಿಗಳಾಗಿ ಎತ್ತಲೋ ಹೋದರು.

 ತರುವಾಯ ಮುಸ್ಲಿಂ ಸಮುದಾಯ ಇಲ್ಲಿ ತಲೆಯೆತ್ತಿತು ಅವರೂ ಕುಟುಂಬ ಸಮಸ್ಯೆಸಂತಾನಹೀನತೆ ಇತ್ಯಾದಿಗಳಿಂದ ದೂರ ಸರಿದರು ನಮ್ಮ ಮುತ್ತಜ್ಜ ಹಿರಣ್ಯ ಗಣಪಯ್ಯ, ಇಸವಿ 1880ರಲ್ಲಿ ಹಿರಣ್ಯದ ಭೂ ಪ್ರದೇಶವನ್ನು ಕೊಂಡುಕೊಂಡರು ಗ್ರಾಮಾಧಿಕಾರಿಯಾಗಿ ಕಾರುಭಾರು ನಡೆಸಿದ ಹಿರಣ್ಯ ಗಣಪಯ್ಯ ಬರೆದಿರಿಸಿದ ಲೆಕ್ಕಪತ್ರದ ಪುಸ್ತಕದ ಬೈಂಡ್ ಪೇಪರ್ ಆಗಿ ಬಳಸಿದ ಕಾಗದ ಇಲ್ಲಿರುವ ಗ್ರಹಣದ ಚಿತ್ರಣ




 


Tuesday 18 October 2022

ಸೊಪ್ಪಿನ ಸಾಸಮೆ

 



ಅಡುಗೆಮನೆಯಲ್ಲಿ ತರಕಾರಿಗಳೇನೋ ಇವೆ ಎಲ್ಲವೂ ಅಂಗಡಿಯಿಂದ ತಂದಿದ್ದು.   ಮನೆ ಹಿತ್ತಲಲ್ಲಿ ತರಕಾರಿ ಬೆಳೆ ಇಲ್ಲ.   ಆದರೂ ಅಂಗಳಕ್ಕಿಳಿಯದೆ ಆಗದು.   ಬೇವಿನ ಸೊಪ್ಪು ಗಾಂಧಾರಿ ಮೆಣಸು ಇತ್ಯಾದಿ ಉಚಿತವಾಗಿ ಭೂಮಿ ತಾಯಿ ನೀಡುತ್ತಿದ್ದಾಳೆ ಅಂಗಳದಲ್ಲಿ ಹೇರಳವಾಗಿ ಬೆಳೆದಿದ್ದ ಕಳೆ ಸಸ್ಯಗಳನ್ನು ಕಿತ್ತೆಸೆಯುತ್ತಿದ್ದಾಗಪೊನ್ನಂಗಣೆಯೆಂಬ ಸಸ್ಯ ದೊರೆಯಿತು ಅದರ ಕುಡಿಚಿಗುರುಗಳನ್ನು ಅಂಗೈಯಲ್ಲಿ ಹಿಡಿಸುವಷ್ಟು ಚಿವುಟಿ ಒಳಗೆ ತಂದಿದ್ದೂ ಆಯ್ತು ಮಧ್ಯಾಹ್ನದ ಅಡುಗೆಗೆ ಹೊಸರುಚಿ ಸಿದ್ಧವಾಗಲಿದೆಅನ್ನಿ.


ಸೊಪ್ಪು ಬುಟ್ಟಿ ತುಂಬ ಇದ್ದರೂ ಅದನ್ನು ಆಯ್ದುಒಳ್ಳೆಯ ಕುಡಿಚಿಗುರೆಲೆಗಳುಎಳೆಯ ದಂಟು ಇತ್ಯಾದಿಗಳನ್ನು ಚಿಕ್ಕದಾಗಿ ಹೆಚ್ಚಿಟ್ಟುಸ್ವಲ್ಪ ನೀರು ಎರೆದು ಬೇಯಿಸುವಲ್ಲಿಗೆ ಒಂದು ಹಿಡಿಯಷ್ಟು ಆಯ್ತು ಇದೆಲ್ಲಿಗೂ ಸಾಲದು ಮನೆಯಲ್ಲಿ ಮಗಳೂ ಇದ್ದಾಳೆ ಅವಳು ಅಚ್ಚುಕಟ್ಟಾಗಿ ಉಣಬೇಡವೇ...


ಒಂದು ದೊಡ್ಡ ಗಾತ್ರದ ನೀರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ತುಸು ತುಪ್ಪದಲ್ಲಿ ಬಾಡಿಸಿಬೇಯಿಸಿದ ಸೊಪ್ಪಿಗೆ ಹಾಕಲಾಯಿತು.   ಒಂದು ಹಿಡಿ ತೆಂಗಿನತುರಿಯೊಂದಿಗೆ ಅರ್ಧ ಚಮಚ ಸಾಸಿವೆ ಕೂಡಿ ಅರೆದು ಸೇರಿಸಿ ರುಚಿಗೆ ಉಪ್ಪು ಸಿಹಿಗೆ ಬೆಲ್ಲ ಹುಳಿಗೆ ಸಿಹಿಮೊಸರನ್ನು ಕೂಡಿ ಸೌಟಿನಲ್ಲಿ ಕಲಕಿದಾಗ ನಮ್ಮ ಅಗತ್ಯಕ್ಕೆ ಬೇಕಾದ ಸಾಸಿವೆ ಸಿದ್ಧವಾಯಿತು.   


ಯಾವ  ಸೊಪ್ಪೂ ಇಲ್ಲದಿದ್ದರೆ ಕೇವಲ ನೀರುಳ್ಳಿಯಿಂದಲೇ ಸಾಸಮೆ ಮಾಡಬಹುದು.   

ಪೊನ್ನಂಗಣೆ ಸೊಪ್ಪು ಯಾವುದಪ್ಪಾ ಎಂದು ತಲೆ ಕೆಡಿಸಿಕೊಳ್ಳದಿರಿ.   ನಮ್ಮೂರಿನ ಪೊನ್ನಂಗಣೆ ನಿಮ್ಮೂರಿನ ಹೊನಗೊನೆ ಸೊಪ್ಪು ತಿಳಿಯಿರಿ.

ಸಸ್ಯಶಾಸ್ತ್ರೀಯವಾಗಿ ಇದು Alternanthera sessilis.   ಜಾಗತಿಕ ಮಟ್ಟದಲ್ಲಿ ಅಡುಗೆಯ ಸೊಪ್ಪು ತರಕಾರಿಯಾಗಿ ಬಳಕೆಯಲ್ಲಿದೆ ಹರಿವೆ ಸೊಪ್ಪಿನ ಪ್ರವರ್ಗಕ್ಕೆ ಸೇರಿದ ಸಸ್ಯ.


 ಅಡುಗೆಯ ತಯಾರಿ ತಿಂಗಳ ಹಿಂದೆ ಮಾಡಿದ್ದು ಈಗ ಹೊನಗೊನೆಯ ಫೋಟೊ ತೆಗೆಯೋಣಾಂದ್ರೆ ಒಂದೇ ಒಂದು ಕಳೆಗಿಡ ಅಂಗಳದಲ್ಲೂ ಇಲ್ಲ ತೋಟದಲ್ಲೂ ಇಲ್ಲ ಹುಲ್ಲು ತೆಗೆಯುವ ಮೆಶಿನ್ ಬಂದು ನಿರ್ಮಲೀಕರಣ ಆಗ್ಬಿಟ್ಟಿದೆ ಕಣ್ರೀ