Pages

Ads 468x60px

Monday 28 September 2020

ಪಚ್ಚ ಬಾಳೆಯ ಹುಳಿ

 


ತೋಟದಲ್ಲಿರುವ ಪಚ್ಚಬಾಳೆ ಗೊನೆ ಹಾಕಿದೆ,  ನೆನಪಿಟ್ಟುಕೊಂಡು ಬಿರುಮಳೆಯ ಅಬ್ಬರ ಕಡಿಮೆ ಆದ ನಂತರ ಈಗ ಬಿಸಿಲುಬಂದಾಗ,  ನೋಡಿಯೇ ಬಿಡೋಣ ಎಂದು ಕತ್ತಿಯೊಂದಿಗೆ ತೋಟದತ್ತ ಹೆಜ್ಜೆ ಹಾಕಿದಾಗ  ಬಾವಲಿಗಳ ಧಾಳಿಗೊಳಗಾದ ಪಚ್ಚಬಾಳೆಸ್ವಾಗತ ನೀಡಿತು.  ಉಳಿದ ಬಾಳೆಕಾಯಿಗಳನ್ನು ಗೊನೆ ಕಡಿದು ತಂದಿದ್ದಾಯ್ತು.


ಹಣ್ಣು ರುಚಿಯಾದರೂ ಎಲ್ಲ ಹಣ್ಣುಗಳನ್ನೂ ತಿಂದು ಮುಗಿಸಲು ನಮ್ಮಿಂದ ಸಾಧ್ಯವಾಗದು ಸಂಕ್ರಾಂತಿಯ ಪೂಜಾ ವಿಧಿಗಳಲ್ಲಿಪಚ್ಚಬಾಳೆ ಬಳಸುವಂತಿಲ್ಲ ದೇವರಿಗೆ ಕದಳೀ ಹಣ್ಣುಗಳೇ ಆಗಬೇಕು ಇರುವ ಬಾಳೆಕಾಯಿಗಳನ್ನು ಅಡುಗೆಗೇ ಬಳಸೋಣ ಅಂಗಡಿ ತರಕಾರಿ ತರಬೇಕಿಲ್ಲ.

ಒಂದು ದಿನ ಸಾಂಬಾರು ಮಾರನೇ ದಿನ ಹುಳಿ ಪಲ್ಯ..  ಸಿಪ್ಪೆಯಿಂದಾನೂ ಪಲ್ಯ ಆಗುತ್ತೆ.   ಹೀಗೆಲ್ಲ ಲೆಕ್ಕ ಹಾಕಿದ್ದಾಯ್ತು.


ಮೊದಲಾಗಿ ಸಾಂಬಾರ್ ಮಾಡೋಣ.


ಎರಡು ಬಾಳೆಕಾಯಿ ಸಾಕು.

ಒಂದು ಹಿಡಿ ತೊಗರಿಬೇಳೆ ಬೇಯಿಸತಕ್ಕದ್ದು.

ಬಾಳೆಕಾಯಿಯ ಹಸಿರು ಸಿಪ್ಪೆ ತೆಳ್ಳಗೆ ಹೆರೆದು ಹೋಳು ಮಾಡುವುದು ದೊಡ್ಡ ಗಾತ್ರ ಆದರೆ ಉತ್ತಮ ಅಂದ ಹಾಗೆಪಚ್ಚಬಾಳೆಯಲ್ಲಿ ಕನರು ಯಾ ಚೊಗರು ಇಲ್ಲ ಆದರೂ ನಾವು ಕತ್ತರಿಸಿದ ಹೋಳುಗಳನ್ನು ನೀರಿನಲ್ಲಿ ಹಾಕಿರಿಸೋಣ ತುಂಬ ಕನರುಇರುವ ಬಾಳೆಕಾಯಿಗಳನ್ನು ಹುಳಿ ಮಜ್ಜಿಗೆ ಎರೆದು ಇಟ್ಟಲ್ಲಿ ಕನರು ಬಿಟ್ಟು ಮಡಿ ಮಡಿಯಾಗಿ ಸಿಗುತ್ತೆ.


 ಬಹು ಬೇಗನೆ ಬೇಯುವ ಪಚ್ಚಬಾಳೆಗೆ ಕುಕರ್ ಬೇಡ ಎರಡು ಮೂರು ನಿಮಿಷದಲ್ಲಿ ಬೆಂದಿರುತ್ತದೆ ತೊಗರಿಬೇಳೆ ಬೆಂದ ನಂತರಅದೇ ಕುಕರಿನಲ್ಲಿ ಬೇಯಿಸಿ ಕುಕರ್ ಸೀಟಿಯೇನೂ ಬೇಡ ಎರಡು ಬಾರಿ ಕುದಿಯುವಲ್ಲಿಗೆ ಬೆಂದಿತೆಂದೇ ತಿಳಿಯಿರಿ.


ಬೇಯಿಸುವ ಹೊತ್ತಿನಲ್ಲಿ ಮಸಾಲೆ ಸಿದ್ಧವಾಗಬೇಕಿದೆ.

ತೆಂಗಿನ ಅರಪ್ಪು ತಯಾರಿ ಹೇಗೆ?


ಎರಡು ಹಿಡಿ ತೆಂಗಿನತುರಿ

ನಾಲ್ಕರಿಂದ ಐದು ಒಣಮೆಣಸು

ಒಂದು ಚಮಚ ಉದ್ದಿನಬೇಳೆ

ಎರಡು ಚಮಚ ಕೊತ್ತಂಬರಿ

ಉದ್ದಿನಕಾಳಿನಷ್ಟು ಇಂಗು

ಸ್ವಲ್ಪ ಜೀರಿಗೆ ಹಾಗೂ ಮೆಂತೆ

ಒಂದೆಸಳು ಕರಿಬೇವು


ಎಣ್ಣೆ ಪಸೆಯಲ್ಲಿ ಹುರಿದು ತೆಂಗಿನತುರಿಯೊಂದಿಗೆ ನೆಲ್ಲಿಗಾತ್ರದ ಹುಳಿ ಚಿಟಿಕೆ ಅರಸಿಣ ಹುಡಿ ಸೇರಿಸಿ ಅರೆಯಿರಿ ಮಸಾಲೆಯತಾಜಾ ಸುವಾಸನೆಗಾಗಿ ನೀರು ತಾಕಿಸದೆ ಅರೆದರೆ ಉತ್ತಮ ಅರಸಿಣ ಹುಡಿಯನ್ನು ತರಕಾರಿ ಬೇಯಿಸುವಾಗಲೂ ಮರೆತುಹೋದರೆ ಕೊನೆಗೆ ಒಗ್ಗರಣೆಯೊಂದಿಗೂ ಹಾಕಬಹುದಾಗಿದೆ ಒಟ್ಟಿನಲ್ಲಿ ರಕ್ತಶುದ್ಧಿಕಾರಕ ಅರಸಿಣವನ್ನು ಮರೆಯಬಾರದು.


ಬೆಂದ ಬೇಳೆ ತರಕಾರಿಗಳೊಂದಿಗೆ ತೆಂಗಿನ ಅರಪ್ಪು ಕೂಡಿಸಿರುಚಿಗೆ ಉಪ್ಪು ಹಾಗೂ ನೀರಿನ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು ಕುದಿಸಿಕರಿಬೇವಿನ ಒಗ್ಗರಣೆ ಕೊಡುವಂತವರಾಗಿನಿಮ್ಮ ಆಯ್ಕೆಗನುಸಾರ ಬೆಳ್ಳುಳ್ಳಿ ಯಾ ಇಂಗು ಒಗ್ಗರಣೆಗೆ ಸೇರಿಸಬಹುದಾಗಿದೆ.


ಪಚ್ಚಬಾಳೇಕಾಯಿಯ  ಸಾಂಬಾರಿನಲ್ಲಿ ಉಣ್ಣುವಾಗ ಜೀಗುಜ್ಜೆಯೆಂಬ ತರಕಾರಿಯಲ್ಲಿ ಉಂಡಷ್ಟೇ ಹಿತಾನುಭವ ದೊರೆತದ್ದುಮಾತ್ರ ಸುಳ್ಳಲ್ಲ!





ಪಚ್ಚಬಾಳೆಯ ಮೇಲಾರ ಮಾಡೋಣ.


ಯಥಾಪ್ರಕಾರ ಎರಡು ಬಾಳೆಕಾಯಿ ಹೆಚ್ಚಿ ಇಡುವುದು.

ಅರ್ಧ ತೆಂಗಿನಕಾಯಿ ತುರಿ ಅವಶ್ಯವಿದೆ ತುರಿಯಿರಿ ಹಾಗೂ ನುಣ್ಣಗೆ ಅರೆಯಿರಿ.

ಎರಡು ಲೋಟ ಸಿಹಿ ಮಜ್ಜಿಗೆ ಇರಲೇಬೇಕುಮೊಸರು ಬೇಡ


ತರಕಾರಿ ಬೇಯಿಸಿ ಆಯ್ತು ಬೇಯಿಸಿದ ನೀರು ಬಸಿದು ಇಟ್ಕೊಳ್ಳಿ.

ಮಜ್ಜಿಗೆ ಎರೆಯಿರಿ.

ತೆಂಗಿನ ಅರಪ್ಪು ಬೆರೆಸಿರಿ.

ಸೌಟಿನಲ್ಲಿ ಹಗುರಾಗಿ ಕಲಕಿ ಅವಶ್ಯವಿದ್ದರೆ ಮಾತ್ರ ತರಕಾರಿ ಬೇಯಿಸಿದ ನೀರು ಎರೆಯಿರಿ.

ರುಚಿಗೆ ಸೂಕ್ತವಾಗುವಂತೆ ಉಪ್ಪು ಹಾಕುವುದು ಹಾಗೂ ಒಮ್ಮೆ ಕುದಿಸುವುದು.

ಕರಿಬೇವುಒಣಮೆಣಸುಗಳಿಂದ ಒಗ್ಗರಿಸುವುದು ಚಿಟಿಕೆ ಅರಸಿಣ ಹಾಕುವುದು.

ಖಾರ ಬೇಕಿದ್ದವರು ತೆಂಗಿನಕಯಿ ಅರೆಯುವಾಗ ಒಂದು ಹಸಿಮೆಣಸು ಹಾಕಿಕೊಳ್ಳಿ.   ಬೇಳೆಕಾಳು ಬೆಲ್ಲ ಬೇಕಿಲ್ಲ



ನಾಲ್ಕು ಬಾಳೆಕಾಯಿಗಳ ಸಿಪ್ಪೆ ಸುಲಿಯಿರಿ,  

ಸಿಪ್ಪೆ ಎಸೆಯಬೇಡಿ ಪಲ್ಯ ಮಾಡೋಣ ಹಸಿರು ನಮ್ಮ ಉಸಿರು ಅನ್ನಿ.


ಸಿಪ್ಪೆಗಳನ್ನು ಪಲ್ಯಕ್ಕೆ ಸೂಕ್ತವಾಗುನಂತೆ ಹೆಚ್ಚಿಕೊಳ್ಳಿ.

ನೀರೆರೆದು ಇಟ್ಟುಕೊಳ್ಳಿ.

ಎರಡು ಚಮಚ ಕಾಯಿ ತುರಿಯನ್ನು ತುಸು ಜೀರಿಗೆ ಹಾಕಿ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ.

ಸಾಸಿವೆ ಸಿಡಿದ ನಂತರ ಕರಿಬೇವು ಚಿಟಿಕೆ ಅರಸಿಣ ಹಾಕುವುದು.

ನೀರು ಬಸಿದು ಬಾಳೆಕಾಯಿ ಸಿಪ್ಪೆಗಳನ್ನು ತಾಕುವುದು.

ರುಚಿಗೆ ತಕ್ಕಷ್ಟು ಉಪ್ಪು ಬೀಳಲಿ.

ಮಧ್ಯಮ ಉರಿಯಲ್ಲಿ ಬೇಯಲಿ.

ಒಂದೆರಡು ಬಾರಿ ಸೌಟಾಡಿಸಿ.

ಬೇಗನೇ ಬೇಯುವ ಪಚ್ಚಬಾಳೆಯ ಸಿಪ್ಪೆ ಕೂಡಾ ರುಚಿಕರ.

ಅರೆದಿಟ್ಟ ತೆಂಗಿನತುರಿ ಹಾಕಿ ಒಮ್ಮೆ ಮಗುಚುವುದು.

ಪಲ್ಯ ಆಯ್ತು.


ಪಲ್ಯ ಮಾಡುತ್ತಿದ್ದಾಗ ಮೊಸರು ಗೊಜ್ಜಿನ ಐಡಿಯಾ ಹುಟ್ಟಿತು.

ಪಲ್ಯ ಮಾಡ್ಕೊಂಡಿರಾ ತೆಂಕಿನ ತುರಿ ಹಾಕದೇ ಪಲ್ಯವನ್ನು ಆರಲು ಬಿಡಿ ಹೊಂದಿಕೆಯಾಗುವಂತೆ ಮೊಸರು ಎರೆಯಿರಿ.


ಇದೇ ಪ್ರಕಾರವಾಗಿ ಬಾಳೆಕಾಯಿ ಯಾ ಹಣ್ಣು ಕೂಡಾ ಮೊಸರು ಗೊಜ್ಜು ಮಾಡಿ ಉಣ್ಣಬಹುದು.





ಹಣ್ಣುಗಳನ್ನು ವೃತ್ತಾಕಾರದಲ್ಲಿ ಹೆಚ್ಚಿಟ್ಟು,  

ತುಪ್ಪದಲ್ಲಿ ಹುರಿದು,

ತುಪ್ಪದಲ್ಲಿ ಹುರಿಯಲು ಗುಳಿಕಾವಲಿ ಉತ್ತಮ.

ಸಕ್ಕರೆ ಪಾಕ ಮಾಡಿಟ್ಟು,

ಸುವಾಸನೆಗ ಏಲಕ್ಕಿ ಹಾಕಿ,

ಹುರಿದ ಬಾಳೆ ಹಣ್ಣುಗಳನ್ನು ಸಕ್ಕರೆ ಪಾಕದಲ್ಲಿ ನೆನೆಸಿ.

ಬಾಳೆ ಹಣ್ಣಿನ ಜಾಮೂನ್ ಎಂದು ಹೆಸರಿಟ್ಟು ಸವಿಯಿರಿ.


ಉಳಿದಿರುವ ಬಾಳೆಹಣ್ಣುಗಳನ್ನು ಹೀಗೇ ಜಾಮೂನ್ ಮಾಡಿ ಇಟ್ಟುಕೊಳ್ಳತಕ್ಕದ್ದು ಎಂಬಲ್ಲಿಗೆ ನಮ್ಮ ಪಚ್ಚಬಾಳೆ ಗೊನೆ ಮುಗಿದಿದೆ.







Sunday 20 September 2020

ಪೊಸಡಿಗುಂಪೆಯ ಹೂವು


 


ನನ್ನ ಕಾಲೇಜು ವ್ಯಾಸಂಗ ಮುಗಿದಿತ್ತು ಅಪ್ಪ ಮೆಡಿಕಲ್ ರೆಸ್ಟ್ ಎಂದು ವಕೀಲಿ ವೃತ್ತಿಯಿಂದ ನಿವೃತ್ತರಾಗಿ ಊರಿನ ತೋಟದಮನೆಯಲ್ಲಿ ವಾಸ್ತವ್ಯ ಹೂಡುವ ಉಮೇದಿನಲ್ಲಿದ್ದರು ತಂಗಿ ತಮ್ಮಂದಿರು ಇನ್ನೂ ಕಲಿಯುತ್ತಿದ್ದಾರೆ ಅವರಿಗೆಲ್ಲ ಒಂದೊಂದು ನೆಲೆಕಲ್ಪಿಸಿ ಅಪ್ಪನೊಂದಿಗೆ ನಾನೂ ಅಮ್ಮ ಹಾಗೂ ಕಿರಿಯ ತಮ್ಮ ಕುಂಬ್ಳೆಯ ಸಮೀಪದಲ್ಲಿರುವ ಕಿಳಿಂಗಾರು ಮನೆಗೆ ತೆರಳುವಂತಾಯಿತು.   ಬಿಡುವಿನ ಸಮಯದಲ್ಲಿ ಕಾಸರಗೋಡಿನಲ್ಲಿದ್ದಾಗ ನಾನೂ ಕಾರ್ ಡ್ಪೈವಿಂಗ್ ಫೋಟೋಗ್ರಾಫಿ ಇತ್ಯಾದಿ ಹವ್ಯಾಸಗಳಲ್ಲಿ ತೊಡಗಿಸಿ ಕೊಂಡಿದ್ದೆ ಹೊಸ ಸಿನೆಮಾ ಬಂದ ಕೂಡಲೇ ಥಿಯೇಟರಿಗೆ ಹೋಗಿ ನೋಡಿ ಬರುವುದೂ ನನ್ನ ಹವ್ಯಾಸಗಳಲ್ಲೊಂದಾಗಿತ್ತು.


ಹಳ್ಳಿಯ ಮನೆಗೆ ಬಂದ ನಂತರ ನನ್ನ ವಿವಿಧ ಹವ್ಯಾಸಗಳಿಗೆ ಬ್ರೇಕ್ ಬಿದ್ದಿತು.   ಓದುವ ಹವ್ಯಾಸದ ಮುಂದುವರಿಕೆಗಾಗಿ ಬೇಳದಲ್ಲಿ ಲೈಬ್ರರಿ ಇರುವುದನ್ನು ತಿಳಿದು ಲೈಬ್ರರಿಗೆ ಸೇರಿದ್ದೂ ಆಯ್ತು ಮೈಲು ದೂರದಲ್ಲಿದ್ದ ಲೈಬ್ರರಿಗೆ ನಾಲ್ಕು ದಿನಕ್ಕೊಮ್ಮೆ ನಡೆದು ಹೋಗಿ ಪುಸ್ತಕ ತರುವ ರೂಢಿ ನಡೆದು ಹೋಗುವ ಕಾಲುದಾರಿಯಂತೂ ನಿಸರ್ಗರಮ್ಯ ತಾಣ ಕಪ್ಪು ಪಾರೆ ಕಲ್ಲುಗಳೂ ಎತ್ತರಕ್ಕೆ ಬೆಳೆದು ನಿಂತ ಮುಳಿಹುಲ್ಲುಗಾವಲು ಅದರೆಡೆಯಿಂದ ಅಲ್ಲಲ್ಲಿ ಇಣುಕುತ್ತಿರುವ ವರ್ಣವಿನ್ಯಾಸದ ಹೂವುಗಳು..


ಪುಟ್ಟ ಪುಟ್ಟ ಹೂವುಗಳೇ..

ಬಿಳಿ ಹಳದಿ ನಸುನೀಲಿ 

ಬಣ್ಣ ಬೆರೆಸಿದವನ್ಯಾರೇ.." 

ಕವನ ಹೊಸೆಯಬಹುದಿತ್ತು.

ಒಂದು ಬಾರಿ  ಲಿಲಿಪುಟ್ ಹೂವುಗಳನ್ನು ದಂಟು ಸಹಿತ ಕಿತ್ತು ಅಮ್ಮನ ವೀಕ್ಷಣೆಗಾಗಿ ತಂದೆಹೂವುಗಳ ಗೊಂಚಲನ್ನು ಕಂಡ ಅಮ್ಮ ,  ಇದೇನಾ ನಿನ್ನ ಹೂವು ಅಕ್ಕತಂಗಿ ಹೂವು  ಅಂತಾರೆ.." 


.. ಹೌದ!??? "

ಇದು ನೋಡುಒಟ್ಟಿಗೇ ಹೂ ಅರಳಿದ್ರೂ ದಂಟು ಒಂದೇ ನಮೂನಿ ಇರೂದಿಲ್ಲ ಒಂದು ಉದ್ದ ಮತ್ತೊಂದು ಗಿಡ್ಡ..  ಹಾಗೆ ಅಕ್ಕತಂಗಿ ಆಗಿ ಬಿಟ್ಟಿವೆ.. “ ಎಂದು ಅಮ್ಮ ಹೂ ದಂಟುಗಳನ್ನು ಹೂದಾನಿಯಲ್ಲಿರಿಸಿ ಆನಂದ ಪಟ್ಟಳು.


 ಕಾಲದಲ್ಲೇ ನನ್ನ ಬಳಿ ಪುಟ್ಟದೊಂದು ಕೆಮರಾ ಇದ್ದಿತ್ತಾದರೂ ಕೇವಲ ಕಪ್ಪು ಬಿಳುಪಿನ ಛಾಯಾಗ್ರಹಣದಲ್ಲಿ  ಹೂವುಗಳ ಸೊಗಸನ್ನು ಸೆರೆ ಹಿಡಿಯಲಾಗದು ಅದೂ ಅಲ್ಲದೆ ಚಿತ್ರದ ನೆಗೇಟಿವ್ ಪ್ರಿಂಟು ಹಿಡಿದು ಕಾಸರಗೋಡಿನ ಪ್ರಕಾಶ್ ಸ್ಟುಡಿಯೋ ಕಡೆ ಹೋಗಿ ಬರಬೇಕಾಗಿತ್ತು.   ದುಬಾರಿ ಹವ್ಯಾಸ ಎಂದೇ ತಿಳಿಯಿರಿ.


~~~~~~~        ~~~~~~~        ~~~~~~~~~~


COVID-19 ಪೂರ್ವಾರ್ಧ ಮುಗಿಯಿತು

ಊರಿನ ದಾರಿಯ ಬಾಗಿಲು ತೆರೆಯಿತು


ಬೆಂಗಳೂರಿನಲ್ಲಿ ಗೃಹಬಂಧನವೋ ಎಂಬಂತೆ ಇದ್ದ ನನ್ನ ಮಕ್ಕಳ ಸೇನೆ  ಬಂದಿದೆಮಗ - ಸೊಸೆ ಮಗಳು - ಅಳಿಯ ವಾರಗಳ ರಜೆಯೊಂದಿಗೆ ಬಂದೇ ಬಿಟ್ಟಿದ್ದಾರೆ.


ಬಂದವರೇ ತಿರುಗಾಟದ ಸ್ಥಳಗಳನ್ನೆಲ್ಲ ವ್ಯವಸ್ಥಿತವಾಗಿ ಗುರುತಿಟ್ಟು ಬೆಳಗೂ ಸಂಜೆಯೂ ವಿಹಾರ ನಡೆಸುವುದೇ ಆಯಿತು.


ಎಲ್ಲಿಗೇಂತ ಹುಬ್ಬೇರಿಸದಿರಿ ನಮ್ಮೂರಿನ ಪ್ರೇಕ್ಷಣೀಯ ಸ್ಥಳ ಪೊಸಡಿಗುಂಪೆ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆ ಕಣ್ಣುಗಳಿಗೆ ಹಬ್ಬ ವಾಹನವನ್ನು ದೂರ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಆನಂದ ಮೋಡ ಕವಿದ ವಾತಾವರಣ ಇದ್ದರೂ ಆಗಸದ ಚೆಲುವಿಗೆ ಸಾಟಿಯಿಲ್ಲ ಹಚ್ಚ ಹಸಿರಿನ ತಾಣ ಬೀಸುವ ಕುಳಿರ್ಗಾಳಿ ಮೊರೆಯುತ್ತಿರುವ ಸಮುದ್ರದ ಅಲೆಗಳ ಅಬ್ಬರದ ದನಿ.


ಇಂತಹ ನಿಸರ್ಗ ಸಿರಿಯೆಡೆಯಿಂದ ಮಗಳು ಕೆಲವು ಫೋಟೊ ಹಿಡಿದು ತಂದಳು.

ಅವಳ ವಯಸ್ಸಿನಲ್ಲಿ ಅಮ್ಮನಿಗಾಗಿ ನಾನು ಕಿತ್ತು ತಂದ ಅದೇ ಹೂವುಗಳು!

ಅರೆರೆ..    ಬ್ಲಾಗ್ ಬರಹಕ್ಕೆ ವಿಷಯ ಸಿಕ್ಕಿತು.    ಹೂವಿನ ಬಾಟನಿ ನೇಮ್ ಸಿಕ್ಕಿ ಬಿಟ್ರೆ.. "

ಅದಕ್ಕೇನಂತೆ ಈಗಲೇ ಹುಡುಕಿ ಕೊಡ್ತೇನೆ.. "  ಎಂದ ಮಗಳು ಕ್ಷಣ ಮಾತ್ರದಲ್ಲಿ ಹೂವಿನ ಗಿಡದ ಜಾತಕವನ್ನು ಕಳಿಸಿಕೊಟ್ಟಳು.


ನಂಗೂ ಸ್ವಲ್ಪ ಹೇಳ್ಕೊಡು.. "

ನೀನು ಯಾಕೆ ಕಷ್ಟ ಪಡ್ತೀಯಾ ಬೇಕಾಗಿರುವಾಗ ಕೇಳು..  ನಾನಿದೀನಲ್ಲ.. "  ಅನ್ನುವುದೇ ಜಾಣೆ ಪೆಣ್ಮಣಿ!


bicolor Persian violet ಎಂಬ  ಸಸ್ಯವು 

Exacum tetragonum ಎಂದು ಸಸ್ಯವಿಜ್ನಾನಿಗಳಿಂದ ಹೇಳಲ್ಪಟ್ಟಿದೆ ಹುಲ್ಲುಗಾವಲು ಇದ್ದಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ ಮಳೆಗಾಲ ಮುಗಿಯುವ ಹಂತದಲ್ಲಿ ಮಾತ್ರ ಕಾಣಬಹುದಾಗಿದೆ.   ತಮಿಳುಮಲಯಾಳಂ ಇದನ್ನು ಚೇಟಿ ಎಂದು ಕರೆದಿವೆ.   ಎಲ್ಲಭಾರತೀಯ ಭಾಷೆಗಳಲ್ಲಿ ವಿವಿಧ ನಾಮ ಹೊಂದಿರುವ ಸಸ್ಯ flower of India ಅನ್ನಲಿಕ್ಕೂ ಅಡ್ಡಿಯಿಲ್ಲ.