Pages

Ads 468x60px

Friday 23 July 2021

ಆಟಿಯ ಅಟಿಲ್

 


ನಿನ್ನೆ ಮನೆಯಿಂದ ಹೊರಡುವಂತಾಯಿತು ಮಗಳು ಸೀರೆ ತಂದ್ಕೊಟ್ಟಿದ್ದಳು ಅದಕ್ಕೊಂದು ಬ್ಲೌಸ್ ಹೊಲಿಸಬೇಕಾಗಿತ್ತು ಈಗ ಹೇಗೂ ಅಂಗಡಿ ಬಾಗಿಲುಗಳು ತೆರೆದಿವೆ ಟೈಲರಂಗಡಿಯೂ ತೆರೆದಿದ್ದೀತು ಮಗನೊಂದಿಗೆ ಮುಂಜಾನೆಯ ತಿಂಡಿತೀರ್ಥ ಆಗುತ್ತಲೇ ಹೊರಟೆ ಮಧ್ಯಾಹ್ನದ ಊಟವಾದ ನಂತರ ಅವನೂ ಬೆಂಗಳೂರಿಗೆ ಹೊರಡುವವನಿದ್ದಾನೆ.


ಅರ್ಧ ಫರ್ಲಾಂಗು ದೂರ ಕ್ರಮಿಸುತ್ತಲೇ ಇವತ್ತು ಯಾವುದೋ ಹಬ್ಬ ನಿಮಿತ್ತ ರಜೆ ಉಫ್..  ಟೈಲರ್ ಬಾಗಿಲೇ ತೆರೆದಿಲ್ಲ.


ಚಿಂತೆ ಮಾಡುವುದಕ್ಕಿಲ್ಲ ಇನ್ನೊಮ್ಮೆ ನೋಡೋಣ.   ಮಧೂ.. ನಾನು ಬಂದಿದ್ದು ಒಳ್ಳೆಯದೇ ಆಯ್ತು...  ಹೊರಗೆ ನೋಡು ರಸ್ತೆಯುದ್ದಕ್ಕೂ ತಗತೆಯ ಹಸಿರು... "


ಥೂ ರಸ್ತೆ ಬದಿಯಿಂದಲೋ..   ಜಾಗ ಏನೂ ಚೆನ್ನಾಗಿಲ್ಲ.."

ಹಂಗಿದ್ರೆ ಒಳ್ಳೇ ಜಾಗ ತೋರಿಸು ಅಲ್ಲಿಂದಲೇ ಸ್ವಲ್ಪ ಚಿವುಟಿದ್ರಾಯ್ತು.."


ಅಂತೂ ಒಂದು ಕಡೆ ಕಾರು ನಿಂತಿತು.   ಮಾಸ್ಕ್ ಧಾರಿಯಾಗಿಯೇ ಒಂದು ಹಿಡಿ ಆಗುವಷ್ಟು ಸೊಪ್ಪನ್ನು  ಚಿವುಟಿದ್ದಾಯ್ತು.


ಹೌದಾ ತಗತೆಯಿಂದ ಏನು ಅಡುಗೆ? "


ಮನೆಗೆ ವಾಪಸ್ ಬಂದ ಕೂಡಲೇ ತಗತೆ ಸೊಪ್ಪಿನ ಚಿಗುರೆಲೆಗಳನ್ನು ಸಾಂಬಾರಿಗೆ ಹಾಕಲು ತೆಗೆದಿರಿಸಿದ್ದಾಯ್ತು.


ಅಮ್ಮಚೆನ್ನಾಗಿ ತೊಳೆದಿದ್ದೀಯಲ್ಲ.. "

ಹ್ಞೂ ತೊಳೆಯದೆ ಹೇಗಾದೀತು? "


 ಸಾಂಬಾರ್ ಮಾಡಿದ್ದು ಹೇಗೆ?


ಮೊದಲು 10ರಿಂದ 12 ಹಲಸಿನ ಬೇಳೆಗಳನ್ನು ಜಜ್ಜಿ ಇಡುವುದು ಜಜ್ಜುವಾಗಲೇ ಹೊರಸಿಪ್ಪೆಗಳು ಬಿಡಿಸಲ್ಪಡುತ್ತವೆ.   ಕುಕ್ಕರಿನಲ್ಲಿ 7 -8 ಸೀಟಿ ಕೂಗಿಸಿ.   ಹಲಸಿನ ಬೇಳೆ ಇನ್ನಿತರ ಬೇಳೆಕಾಳುಗಳಂತಲ್ಲ ಬೇಯದಿದ್ದರೆ ಅಜೀರ್ಣ ವ್ಯಾಧಿ ಯಾ ವಾಯುಪ್ರಕೋಪ ಶುರುವಾದೀತು.


ಬೆಂದ ನಂತರ ತರಕಾರಿ ಹೋಳುಗಳನ್ನು ಹಾಕಿ ಬೇಯಿಸಿ ನಾನು ಹಾಕಿದ್ದು ಸೌತೆ.   ಜತೆಗೇ ತಗತೆ ಚಿಗುರುಗಳನ್ನೂ ಹಾಕುವುದು.

ಉಪ್ಪಿನಲ್ಲಿ ಇಟ್ಟ ಅಂಬಟೆ ಇರುವುದರಿಂದ 3 ಅಂಬಟೆಗಳನ್ನು ಹೋಳು ಮಾಡಿ ಹಾಕಲಾಯಿತು ಇನ್ನು ಹುಣಸೆ ಹಣ್ಣುಟೊಮ್ಯಾಟೋ ಹಾಕಬೇಕಾಗಿಯೇ ಇಲ್ಲ.


ರುಚಿಗೆ ಉಪ್ಪು ಹಾಕಿಯೇ ತರಕಾರಿಗಳನ್ನು ಬೇಯಿಸಿ ಆಯಿತು.


ಇದೀಗ ಮಸಾಲೆ ಆಗಬೇಕಿದೆ

ಅರ್ಧ ತೆಂಗಿನ ತುರಿ

ಒಣಮೆಣಸು

ದೊಡ್ಡ ಚಮಚ ಉದ್ದಿನಬೇಳೆ

ಚಮಚ ಕೊತ್ತಂಬರಿ

ಜೀರಿಗೆ ಹಾಗೂ ಮೆಂತೆ  ಒಂದು ಪುಟ್ಟ ಚಮಚದಲ್ಲಿ ಸಾಕು,

ಕಡ್ಲೆ ಕಾಳಿನಷ್ಟು ಇಂಗು

ಕರಿಬೇವು 

ಇಷ್ಟನ್ನೂ ತುಸು ಎಣ್ಣೆಪಸೆಯಲ್ಲಿ ಹುರಿಯಿರಿ

ತೆಂಗಿನತುರಿಯೊಂದಿಗೆ ಅರೆಯಿರಿ.

ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿ,

ಸೌಟಿನಲ್ಲಿ ತಿರುಗಿಸಿ,

ಉಪ್ಪು ಸಾಕಾಗದಿದ್ದರೆ ಹಾಕುವುದು,

ನೀರು ಸಾಲದಿದ್ದರೆ ಎರೆಯುವುದು,

ಮರೆಯದೆ ಒಂದು ತುಂಡು ಬೆಲ್ಲ ಹಾಕುವುದು,

ನಂತರ ಕುದಿಸಿ ಕೆಳಗಿಳಿಸಿ ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವುದು.

ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿದರೆ ಚೆನ್ನಾಗಿರುತ್ತದೆ.

ಇದೀಗ ತಗತೆ ಬೇಳೆ ಗಸಿ  ತಯಾರಾಗಿದೆ.


ಮಧೂ ಊಟಕ್ಕೆ ಬಾ.. "

 

ಇನ್ನೀಗ  ಬೆಂಗಳೂರಿಗೆ ಬೇಕಾದ ಸಾಮಗ್ರಿಗಳನ್ನು ಕಟ್ಟಿ ಕೊಡುವ ಸಮಯ.

 

ಉಳಿದ ತಗತೆ ಸೊಪ್ಪನ್ನು ಜೋಪಾನವಾಗಿ ತೆಗೆದಿರಿಸಿಯೂ ಆಯ್ತು ನಾಳೆ ಇನ್ನೊಂದು ಅಡುಗೆ ಆಗಲಿದೆ ಹೇಗೂ ಈಗ ಆಟಿ ತಿಂಗಳು ತಗತೆ ಸೊಪ್ಪು ಸರಿಯಾದ ಸಮಯಕ್ಕೆ ದೊರೆತಿದ್ದು ಕೂಡಾ ಸಂತಸದ ವಿಷಯ.


ನೀವೂ ತಿನ್ನಿ ಮಳೆಗಾಲದ ರೋಗರುಜಿನಗಳಿಂದ ಮುಕ್ತರಾಗಿ ನೆಮ್ಮದಿಯಿಂದಿರಿ.


ಸಂಸ್ಕೃತದಲ್ಲಿ ಚಕ್ರಮರ್ದ ಎನ್ನಲಾಗುವ ತಗತೆ ಆಯುರ್ವೇದ ರೀತ್ಯಾ ಒಂದು ಔಷಧೀಯ ಸಸ್ಯ.

ಅಂದ ಹಾಗೆ ಮಹಿಳೆಯರನ್ನೇ ಕಾಡುವ ಮಂಡಿನೋವು ಇದೆಯಲ್ಲಅದಕ್ಕೂ ನಿವಾರಣೆ  ತಗತೆಯಿಂದ ಸಾಧ್ಯವಂತೆ ಏನಿದ್ರೂ ತಜ್ಞರ ಸಲಹೆ ಉತ್ತಮ.

ಒಳ್ಳೆಯದೆಂದು ಅತಿ ಬಳಕೆ ಸಲ್ಲದು.

ಮಿತ ಪ್ರಮಾಣದಲ್ಲಿ ಆಡುಗೆಯಲ್ಲಿ ಬಳಸಿರಿ.

 ಹಿಂದೆಯೂ ತಗತೆಯ ಹಲವು ಅಡುಗೆಗಳನ್ನು ಬರೆದಿದ್ದೇನೆ.   ಸಸ್ಯ ವಿಶೇಷತೆಯನ್ನೂ ವರ್ಣಿಸಿದ್ದೇನೆ ಸಾಧ್ಯವಾದರೆ ಹುಡುಕಿ ಓದಿರಿ.




 


Wednesday 14 July 2021

ಅಂಬಟೆಯ ಅವಿಲ್

 



ಅಂಬಟೆಯ ಎಳೆ ಮಿಡಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕಿದ್ದಾಗಿದೆ ಬೆಂಗಳೂರಿಗೆ ತೆರಳುವಾಗ ಮಧು ತನಗೂ ತಂಗಿಗೂ ಕೊಂಡೊಯ್ದು ಆಯಿತು ಇದೆಲ್ಲ ಒಂದು ತಿಂಗಳ ಹಿಂದಿನ ಮಾತು.


ನಿನ್ನೆ ತೆಂಗಿನಕಾಯಿ ಕೊಯ್ಯಲು ತಾಳ್ತಜೆಯಿಂದ ನಾರಾಯಣ ಬಂದಿದ್ದಾಗ ತೋಟದಿಂದ ಅಂಬಟೆಯನ್ನೂ ಕೊಯ್ದು ತರಲು ಹೇಳಿದಾಗ ಬುಟ್ಟಿ ತುಂಬ ಅಂಬಟೆ ಬಂದಿತು.   ಈಗ ಅಂಬಟೆ ಗೊರಟು ಕಟ್ಟಿದೆ ಇದನ್ನೂ ಕತ್ತಿಯಲ್ಲಿ ಸ್ವಲ್ಪ ಶ್ರಮ ಪಟ್ಟು ಹೋಳು ಮಾಡಿ ಉಪ್ಪಿನಕಾಯಿ ಹಾಕಿಕೊಳ್ಳಬಹುದು.


ದಿನವೂ ಚಟ್ಣಿ ಸಾರುಗೊಜ್ಜು ಎಂದು ಉಣಲಡ್ಡಿಯಿಲ್ಲ ನಾಲ್ಕು ದಿನ ಕಳೆದಾಗ ಬುಟ್ಟಿಯಲ್ಲಿದ್ದ ಅಂಬಟೆಗಳು ಬಾಡುತ್ತಿವೆಯೇನೋ ಎಂದೆನ್ನಿಸಿ ಎಲ್ಲವನ್ನೂ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಟ್ಟಾಯ್ತು ನೀರು ಹಾಕುವುದಕ್ಕಿಲ್ಲ ರಸಭರಿತವಾದ ಅಂಬಟೆಯಲ್ಲಿ ತಾನಾಗಿಯೇ ನೀರೆದ್ದುಕೊಳ್ಳುವುದರಿಂದ ಇದನ್ನು ದಾಸ್ತಾನು ಇಡಬಹುದಾಗಿದೆ  ಇದೇ ತರಹ ಮಾವಿನಕಾಯಿಗಳನ್ನೂ ಹಲಸಿನಸೊಳೆಗಳನ್ನೂ ಉಪ್ಪಿನಲ್ಲಿ ದಾಸ್ತಾನು ಇಡುವ ರೂಢಿ ನಮ್ಮದು.  


 ಗ್ರಾಮೀಣ ಪ್ರದೇಶದ ಒಂದು ನಿರ್ಲಕ್ಷಿತ ಬೆಳೆ  ಅಂಬಟೆ.

ಉಪ್ಪಿನ ಅಂಬಟೆಯ ಕೆಲಸ ತ್ರಾಸದಾಯಕವಲ್ಲ ಶುಭ್ರವಾದ ಜಾಡಿಯ ತಳದಲ್ಲಿ ಒಂದು ಹಿಡಿ ಉಪ್ಪು ಹರಡುವುದು,  

ಮೇಲಿನಿಂದ ಹತ್ತಿಪ್ಪತ್ತು ಅಂಬಟೆಗಳನ್ನು ಹಾಕುವುದು ಪುನಃ ಉಪ್ಪು ಮತ್ತು ಅಂಬಟೆ ಹಾಕುತ್ತ ಬರುವುದು,

ಕೊನೆಯಲ್ಲಿ ಮೇಲಿನಿಂದ ಇನ್ನಷ್ಟು ಉಪ್ಪು ಹಾಕಿಟ್ಟು ಜಾಡಿಯನ್ನು ಭದ್ರವಾಗಿ ಗಾಳಿ ಹೋಗದಂತೆ ಮುಚ್ಚಿದರಾಯಿತು.


ಅಂಬಟೆಯ ಹುಳಿಯಿಂದಾಗಿ ಉಪ್ಪಿನಲ್ಲಿ ಅದ್ದಿದ ಅಂಬಟೆ ಅಡುಗೆಯಲ್ಲಿ ಬಹಳ ಉಪಯುಕ್ತ ಹುಣಸೆಹುಳಿಗೆ ಪರ್ಯಾಯವಾಗಿ ಬಳಸಿರಿ ಸಾಂಬಾರು ಮಾಡುವಾಗ ಎರಡು ಅಂಬಟೆಗಳನ್ನು ಹಾಕಿದರಾಯಿತು ಹುಣಸೆ ಹುಳಿ ಬೇಕಾಗಿಲ್ಲ ತುಸುವೇ ಗೊರಟು ಕಟ್ಟಿರುವುದರಿಂದ ತಿನ್ನಲೂ ಹಿತವಾಗಿರುತ್ತದೆ.


 ದಿನ ನಾವು ಅಂಬಟೆಯನ್ನು ಬಳಸಿ ಅವಿಲ್ ಯಾ ಅವಿಯಲ್ ಮಾಡುವವರಿದ್ದೇವೆ.

ಸಾಕಷ್ಟು ವೈವಿಧ್ಯಮಯ ತರಕಾರಿಗಳಿವೆ.

ಹಸಿ ತೆಂಗಿನಕಾಯಿಯೂ ಇದೆ.

ಈಗ ತಾನೇ ಕಡೆದ ಸಿಹಿ ಮಜ್ಜಿಗೆಯಿದೆ.   ಮಜ್ಜಿಗೆಯೂ ದಪ್ಪವಾಗಿದೆ ಒಂದು ಲೋಟ ಮಜ್ಜಿಗೆ ತೆಗೆದಿರಿಸುವುದು.

ಅರ್ಧ ಕಡಿ ತೆಂಗಿನ ತುರಿ ಸಾಕು.

ತರಕಾರಿಗಳನ್ನು ಇದ್ದಂತೆ ಬಳಸುವುದು.  

ಬೇಕಾದಂತಹ ತರಕಾರಿಗಳನ್ನು ಮೊದಲಾಗಿ ತೊಳೆಯುವುದು.

15 ತೊಂಡೆಕಾಯಿ ನಾಲ್ಕು ಹೋಳು ಮಾಡುವುದು.

10 ರಿಂದ 20 ಅಲಸಂದೆ ಸಮಾನ ಗಾತ್ರದಲ್ಲಿ ಕತ್ತರಿಸುವುದು.

ಒಂದು ಪಡುವಲ ಕಾಯಿ,  

ಗಡ್ಡೆ ತರಕಾರಿಯ ಬಾಬ್ತು ನಿನ್ನೆಯ ಅಡುಗೆಯಲ್ಲಿ ಬಳಸಿ ಉಳಿದ ಸಿಹಿಗೆಣಸು ಇದ್ದಿತು ಅದನ್ನೂ ಹೆಚ್ಚಿಡಲಾಯಿತು ಸಾಮಾನ್ಯವಾಗಿ ನಾವು ಹಳ್ಳಿ ಮಂದಿ ಹಿತ್ತಲ ಬೆಳೆಯಾದ ಮುಂಡಿಕೇನೆ ಗೆಡ್ಡೆಗಳನ್ನು ಬಳಸುವ ರೂಢಿ.   ಯಾವುದೂ ಸಿಗದಿದ್ದರೆ ಅಂಗಡಿಯ ಕ್ಯಾರೇಟು ಇದೆಹಾಗೆಂದು ಬೀಟ್ರೂಟ್ ಗೆಡ್ಡೆ ಹಾಕಲೇಬಾರದು ಅದು ಅವಿಲಿನ ಅಂದಗೆಡಿಸಿ ಬಿಟ್ಟೀತು.

ಉಳಿದಂತೆ ಬಾಳೆಕಾಯಿ ಕೂಡಾ ಹಾಕುವುದಿದೆ ಇವತ್ತು ನಾನು ಬಾಳೆಕಾಯಿ ಹಾಕಿಲ್ಲ.

ಎಲ್ಲವೂ ಸೇರಿದಾಗ ಒಂದು ಲೀಟರ್ ಅಳತೆಯ ಪಾತ್ರೆ ತುಂಬಿತು ಇಷ್ಟು ಸಾಕು.


ತರಕಾರಿಗಳನ್ನು ಕುಕ್ಕರಿನಲ್ಲಿ ತುಂಬಿ, 2ರಿಂದ 3 ಅಂಬಟೆಗಳೊಂದಿಗೆ ಬೇಯಿಸಿಬೇಯಲು ಬೇಕಾದಷ್ಟೇ ನೀರು ಎರೆಯಿರಿ ರುಚಿಗೆ ಬೇಕಾದ ಉಪ್ಪು ಈಗಲೇ ಹಾಕಬೇಕುಅಂಬಟೆಗಳನ್ನು ಜಜ್ಜಿ ಹಾಕಿದರೆ ಉತ್ತಮ ಕತ್ತಿಯಲ್ಲಿ ಗೀರು ಎಳೆದರೂ ಸಾಕು.

ಒಂದು ಸೀಟಿ ಹಾಕಿದಾಗ ಸ್ಟವ್ ನಂದಿಸಿ ನಿಧಾನವಾಗಿ ಒತ್ತಡ ತೆಗೆಯಿರಿ ತರಕಾರಿಗಳು ಬೆಂದಿವೆ.


ಇದೀಗ ತೆಂಗಿನಕಾಯಿ ಅರೆಯಿರಿ.

ಅರೆಯುವಾಗ 2 ಹಸಿಮೆಣಸು ಪುಟ್ಟ ಚಮಚ ಜೀರಿಗೆ ಹಾಗೂ ಚಿಟಿಕೆ ಅರಸಿಣ ಹಾಕತಕ್ಕದ್ದು.

ಅತಿ ಕಡಿಮೆ ನೀರು ಬಳಸಿಸಾಧ್ಯವಿದ್ದಷ್ಟು ನುಣ್ಣಗೆ ಅರೆದಷ್ಟೂ ಪದಾರ್ಥ ರುಚಿಕರವಾಗುವುದೆಂದು ತಿಳಿದಿರಲಿ.


ತೆಂಗಿನ ಅರಪ್ಪು  ತರಕಾರಿಗಳೊಂದಿಗೆ ಕೂಡುವ ಮೊದಲೇ ಬೇಯಿಸಿದ ನೀರನ್ನು ಬಸಿದು ಇಟ್ಕೊಳ್ಳಿ ಇದೀಗ ಕಾಯಿ ಅರಪ್ಪು ಯಾ ರುಬ್ಬಿದ  ಮಸಾಲೆ ಬೆರೆಸಿ ತೆಗೆದಿರಿಸಿದ ದಪ್ಪ ಮಜ್ಜಿಗೆ ಎರೆಯಿರಿ ಗಟ್ಟಿ ಮುದ್ದೆಯಂತೆ ಆಯಿತೇ ಇಟ್ಕೊಂಡಿದ್ದೀರಲ್ಲ ತರಕಾರಿ ಬೇಯಿಸಿದ ನೀರು ಅದನ್ನು ಸೂಕ್ತವಾಗುಮಂತೆ ಎರೆದು ಕುದಿಯಲು ಇಡುವುದು.

ರುಚಿಯ ಉಪ್ಪು ಸಾಲದಿದ್ದರೆ ಹಾಕುವುದು ಚಿಕ್ಕ ತುಂಡು ಬೆಲ್ಲವೂ ಬೀಳಲಿ.

ಒಂದು ಕುದಿ ಬಂದಾಗ ಕೆಳಗಿಳಿಸುವುದು.

ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಬೀಳುವಲ್ಲಿಗೆ ಅಂಬಟೆಯ ಅವಿಲ್ ಎಂಬ ಕಥಾನಕ ಪೂರ್ಣಗೊಂಡಿದೆ.


ಇನ್ನೇನು ಓಣಂ ಹಬ್ಬ ಬರಲಿದೆ ಓಣಂ ಭೋಜನಕೂಟ ಅವಿಲ್ ಇಲ್ಲದೆ ನಡೆಯದು.

ತೆಂಗಿನಕಾಯಿ ಹಾಕಿದ ಯಾವುದೇ ಅಡುಗೆಯಿರಲಿ ತೆಂಗಿನೆಣ್ಣೆಯಂದಲೇ ಒಗ್ಗರಣೆ ಬಿದ್ದರೆ ಅಡುಗೆ ಪರಿಪೂರ್ಣವಾದಂತೆ.



Thursday 1 July 2021

ಬಣ್ಣದ ಪಪ್ಪಾಯಿ

 



ವರ್ಷಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಮಂಗಳೂರಿಗೆ ಹೋಗಬೇಕಾಗಿ ಬಂದಿತ್ತು ಆಗ ಕೋವಿಡ್ ಕೊರೋನಾ ಲಾಕ್ಡೌನ್ಕ್ವಾರೆಂಟೈನ್ ಮಾಸ್ಕ್ ಇತ್ಯಾದಿ ಹೊಸ ಪದ ಸಮೂಹಗಳು ಬಂದಿದ್ದಿಲ್ಲ.   ಚಿಕ್ಕಪ್ಪ ಮುಳ್ಳಂಕೊಚ್ಚಿ ಗಣಪತಿ ಭಟ್ಟರೇ ಮಂಗಳೂರಿನ ಸೀನಿಯರ್ ವೈದ್ಯರಾಗಿರುವಾಗ ಅವರ ಮನೆಗೇ ಹೋದೆವು.   

ನಮಗೆ ಅತಿಥಿ ಸತ್ಕಾರ ನೀಡಿದ್ದು ಡಾಕ್ಟರ ಮಗಳು ಸಂಧ್ಯಾ.

ತಟ್ಟೆಯಲ್ಲಿದ್ದ ಕೆಂಪು ಬಪ್ಪಂಗಾಯಿ ಹೋಳುಗಳು ನನ್ನನ್ನು ಆಕರ್ಷಿಸಿ ಬಿಟ್ಟಿತು.   ಮನೆಯಲ್ಲಿದ್ದ ಕೆಂಪು ಜಾತಿಯದು ಅಳಿದೇಹೋಗಿತ್ತು.   ಸಂಧ್ಯಾ ಇದರ ಬೀಜ ಇದ್ರೆ ಕೊಟ್ಟಿರು ಗಿಡ ಮಾಡಿಕೊಳ್ತೇನೆ.. "  


ಹೊರಡುವಾಗ ಬಪ್ಪಂಗಾಯಿ ಬೀಜಗಳು ನನ್ನ ಕೈಚೀಲ ಸೇರಿದುವು ಆಗ ಜನವರಿ ಮೊದಲ ವಾರ ತೋಟಕ್ಕೆ ಇನ್ನೂ ನೀರು ಹಾಯಿಸಲು ಆರಂಭ ಆಗಿಲ್ಲ  ಬೀಜಗಳನ್ನು ಹೇಗೆ ಸಸಿ ಮಾಡಿಕೊಳ್ಳಲಿ? "  ಮನೆಯ ಸದಸ್ಯರು ಯಾರೂ ಕ್ಯಾರೇ ಅನ್ನಲಿಲ್ಲ ಕೊನೆಗೆ ಬಚ್ಚಲು ಮನೆಯ ಹಿಂದೆ ನೀರು ಹರಿದು ಹೋಗುತ್ತಿರುವಲ್ಲಿ ಸೂಕ್ತ ಸ್ಥಳದ ಆಯ್ಕೆ ಮಾಡಿ ಬೀಜಗಳನ್ನು ಹಾಕಲಾಯಿತು ಮೇಲಿನಿಂದ ಅಡಿಕೆ ಸಿಪ್ಪೆ ಹರಡಲಾಯಿತು.   ನೀರು ಚಿಮುಕಿಸಿದ್ದೂ ಆಯಿತು ಎರಡು ದಿನಕ್ಕೊಮ್ಮೆ ವೀಕ್ಷಣೆ.   ಒಂದು ದಿನ ಮೊಳಕೆಯೊಡೆದ ಕುಡಿ...   ಮುಂದೆ ಹತ್ತಾರು ದಿನಗಳಲ್ಲಿ ಹಲವು ಗಿಡಗಳು ಮೇಲೆದ್ದುವು.


ಅದೇ ಸಮಯದಲ್ಲಿ ಆಧುನಿಕ ಬಾತ್ ರೂಂ ನಿರ್ಮಾಣವಾಗುತ್ತಲಿತ್ತು ಸೋಲಾರ್ ಬಿಸಿನೀರು ಅಳವಡಿಸಿದ ನಂತರ ಯಾರೊಬ್ಬರೂ ಹಳೆಯ ಬಚ್ಚಲುಮನೆಗೆ ಕಾಲೇ ಇಡದೆ ನನ್ನ ಪಪ್ಪಾಯಿ ಗಿಡಗಳಿಗೆ ನೀರಿಲ್ಲವಾಯಿತು,    ವೇಳೆಗೆ ಕೊರೋನಾ ಲಾಕ್ ಡೌನ್ ಎಂದು ಇದ್ದನೊಬ್ಬ ಚೆನ್ನಪ್ಪನೂ ಮಾಯವಾಗಿದ್ದ.   ಚಿಂತಿಲ್ಲ ಇನ್ನೇನು ಮಳೆಗಾಲ ಬರಲಿದೆ,   ಅಲ್ಲದೆ ಆಗೊಮ್ಮೆಈಗೊಮ್ಮೆ  ಮಳೆ ಹನಿ ಬೀಳುತ್ತಲಿದೆ.


ಮಳೆಗಾಲ ಶುರುವಾಯಿತು ಒಮ್ಮೆ ಪಪ್ಪಾಯಿ ಗಿಡದ ಬಳಿ ಬಂದಾಗ ಸುತ್ತಮುತ್ತ ಕಳೆ ಗಿಡಗಳ ಆವರಣಕತ್ತಿ ಹಿಡಿದು ಕಳೆಗಳನ್ನು ಸವರಬೇಕಾಯಿತು.   ಏಳೆಂಟು ಪಪ್ಪಾಯಿ ಗಿಡಗಳು ಒಟ್ಟಿಗೆ ಬೆಳೆಯುತ್ತಲಿವೆ ಬಲಿಷ್ಟವಾಗಿದ್ದ ಒಂದು ಗಿಡವನ್ನು ಬಿಟ್ಟು ಉಳಿದೆಲ್ಲ ಗಿಡಗಳನ್ನು ಕಿತ್ತು ನಮ್ಮೆಜಮಾನ್ರ ಕೈಯಲಿಟ್ಟು  ಕೆಂಪು ಬಪ್ಪಂಗಾಯಿ ಗಿಡ ನಾಗಬನಕ್ಕೆ ಹೋಗುವ ದಾರಿಯಲ್ಲಿ ಹೊಸ ಕೆಂಪುಮಣ್ಣು ಹಾಕಿರುವಲ್ಲಿ ನೆಡಿಸಿ.. “   ನನ್ನ ಅಪ್ಪಣೆಯಂತೆ ನೆಟ್ಟರೋ ಬಿಟ್ಟರೋ ತಿಳಿಯದು.


ಪಪ್ಪಾಯಿ ಹೂ ಬಿಟ್ಟಿತು ಹೆಣ್ಣು ಹೂ ಬಪ್ಪಂಗಾಯಿ ಗಿಡದಲ್ಲಿ ಎರಡು ವಿಧ ಹೆಣ್ಣು ಮತ್ತು ಗಂಡು ಒಂದು ವೇಳೆ ಗಂಡು ಗಿಡವಾಗಿದ್ದರೆ ಕಡಿದು ಹಾಕಬೇಕಾಗಿತ್ತು.


ಪಪ್ಪಾಯಿ ಹೂ ಗಂಡೋ ಹೆಣ್ಣೋ ತಿಳಿಯುವುದು ಹೇಗೆ?

ಗಂಡು ಹೂವು ಗೊಂಚಲು ಗೊಂಚಲಾಗಿ ಅರಳುತ್ತದೆ.   ಅದರಲ್ಲಿ ಪಪ್ಪಾಯಿ ಆಗುತ್ತದಾದರೂ  ಕಾಯಿಗಳನ್ನು ಕೊಯ್ದವರನ್ನು ನಾನು ಕಂಡಿಲ್ಲ.   ಹೆಣ್ಣು ಗಿಡದಲ್ಲಿ ಒಂದೊಂದೇ ಹೂ ಅರಳುತ್ತೆ.



ಮೊದ ಮೊದಲು ಅರಳಿದ ಹೂಗಳೆಲ್ಲ ಬಿದ್ದೇ ಹೋದವು ಚಿಕ್ಕ ಗಿಡ ಅಲ್ವೇ ಗೊಬ್ಬರದ ಹಂಗಿಲ್ಲದೆ ಒಂದು ಹೂ ಕಾಯಾಗಿ ನಿಂತಿತು ಡಿಸೆಂಬರ್ ತನಕ ಮಳೆಗಾಲ ನಮ್ಮದು,    ತರುವಾಯ ತೋಟಕ್ಕೆ ನೀರು ಹಾಯಿಸುವ ಸಮಯ ಅಂತೂ ಇಂತೂ ಪಪ್ಪಾಯಿ ಗಿಡ ಬೆಳೆದು ಒಂದೇ ಒಂದು ಫಲ ಕೊಟ್ಟಿತು.   ಪುಟ್ಟ ಗಿಡ ಅಲ್ವೇ,   ಅರಳಿದ ಹೂಗಳೆಲ್ಲ ಕಾಯಿ ಆಗಿ ಬಲಿತಿದ್ರೆ ಗಿಡ ಭಾರ ತಾಳಲಾರದೆ ಬಿದ್ದೇ ಹೋಗುತ್ತಲಿತ್ತು ಇದು ಪ್ರಕೃತಿಯ ಸಮತೋಲನಕ್ಕೆ ಒಂದು ಉದಾಹರಣೆ ಎಂದು ತಿಳಿಯಿರಿ.


ಲಾಕ್ಡೌನ್ ಎಂದು ಮಗನೂ ಮನೆಗೆ ಬಂದ ಸಮಯಕ್ಕೆ ಕೊಯ್ಯುವಂತಾಯಿತು ಕೊಕ್ಕೆ ದೋಟಿ ಕತ್ತಿಗಳ ಹಂಗಿಲ್ಲದೆ ಕೈಯಲ್ಲೇ ಕೊಯ್ಯುವ ಭಾಗ್ಯ ನನ್ನದು.


ತೋಟದಲ್ಲಿ ಕೆಂಪು ಹಲಸು ಕೆಂಪು ಚಕೋತಾಕೆಂಪು ಪೇರಳೆ ಕೆಂಪು ನಕ್ಷತ್ರ ಹಣ್ಣು ಹಾಗೂ ಕೆಂಪು ಚೆರ್ರಿಗಳೊಂದಿಗೆ ಈಗ ಕೆಂಪು ಪಪ್ಪಾಯಿ ಸೇರಿಕೊಂಡಿತು.


ಪಪ್ಪಾಯಿ ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ  ತಿಂದುಳಿದ  ಹೋಳುಗಳನ್ನು ಫ್ರಿಜ್ ಒಳಗಿಟ್ಟು ಸಂಜೆ ಮಿಲ್ಕ್ ಶೇಕ್ ಮತ್ತು  ಜ್ಯೂಸ್ ಎಂದು ಕುಡಿಯಲಾಯಿತು.


ಹೋಳುಗಳನ್ನು ಮಿಕ್ಸಿಯಲ್ಲಿ ತುಂಬಿಸಿಹಿಗೆ ತಕ್ಕಷ್ಟು ಸಕ್ಕರೆ ಹಾಕಿ ರೊಂಯ್ ಎಂದು ತಿರುಗಿಸಿ,

ಸೂಕ್ತ ಪ್ರಮಾಣದಲ್ಲಿ ಹಾಲು ಎರೆಯುವಲ್ಲಿಗೆ ಮಿಲ್ಕ್ ಶೇಕ್ ಆಯ್ತು,

ಹಾಲು ಸೇರದವರು ನೀರು ಹಾಕ್ಕೊಳ್ಳಿ ಪಪ್ಪಾಯಿ ಜ್ಯೂಸ್ ಕುಡಿಯಿರಿ.