ಒಂದೆರಡಲ್ಲ, ನಾಲ್ಕು ಬಪ್ಪಂಗಾಯಿ ಕೊಯ್ದು ಇಟ್ಟ ಚೆನ್ನಪ್ಪ. ಎಲ್ಲವೂ ಹಣ್ಣು. ಏನು ಮಾಡಲೀ...
ನಮ್ಮ ತೋಟದಲ್ಲಿ ನಾಗಬನ ಇದೆ.
ಬೆಳಗಾದರೆ ಶ್ರೀನಾಗದೇವರ ಸನ್ನಿಧಾನಕ್ಕೆ ಅನಿರೀಕ್ಷಿತ ಅತಿಥಿಗಳ ಆಗಮನ.
ದೊಡ್ಡ ಪರಿವಾರವೇ ಬಂದಿತ್ತು, ಪುಟ್ಟ ಮಕ್ಕಳೂ...
ಎಲ್ಲಿಂದ ಬಂದವರೋ, ಈ ರಣಬಿಸಿಲಿಗೆ ಬಾಯಾರಿಕೆ ಕೊಡದಿದ್ದರೆ ಹೇಗೆ?
ತಂಬಿಗೆ ತುಂಬ ನೀರು, ಬೆಲ್ಲದೊಂದಿಗೆ ಸತ್ಕಾರ.
ಥಟ್ ಎಂದು ಐಡಿಯಾ!
ಪಪ್ಪಾಯಿ ಚಕಚಕನೆ ಕತ್ತರಿಸಲ್ಪಟ್ಟಿತು.
.
.
ಹಣ್ಣು ಆನಂದ ಪಟ್ಟಿತು.
0 comments:
Post a Comment